ಮೂಡುಬಿದಿರೆ: ಯುವವಾಹಿನಿ ಕೇಂದ್ರ ಸಮಿತಿಯ ಅಂತರ್‌ಘಟಕ ಕ್ರೀಡೋತ್ಸವ–2026 ಅನ್ನು ಅಕ್ಟೋಬರ್ 4ರಂದು ಮೂಡುಬಿದಿರೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಕೇಂದ್ರ ಸಮಿತಿಯ ಮಾಸಿಕ ಸಭೆಯಲ್ಲಿ ಕ್ರೀಡೋತ್ಸವದ ಪೋಸ್ಟರ್ ಅನ್ನು ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಬಿಡುಗಡೆಗೊಳಿಸಿದರು.

ಕೇಂದ್ರ ಸಮಿತಿಯ ಅಂತರ್‌ಘಟಕ ಡೆನ್ನಾನ–ಡೆನ್ನಾನ ಸಾಂಸ್ಕೃತಿಕ ಸ್ಪರ್ಧೆ–2018 ಹಾಗೂ ಯುವವಾಹಿನಿ ಸಮಾವೇಶ–2024ರ ಆತಿಥ್ಯ ವಹಿಸಿದ್ದ ಘಟಕವು ಇದೀಗ ಅಂತರ್‌ಘಟಕ ಕ್ರೀಡೋತ್ಸವ–2026ರ ಆಯೋಜನೆಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ.

ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಕೋಟ್ಯಾನ್, ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.

ಅಕ್ಟೋಬರ್ 4ರಂದು ನಡೆಯಲಿರುವ ಕ್ರೀಡೋತ್ಸವದಲ್ಲಿ ಕೇಂದ್ರ ಸಮಿತಿಯ ಎಲ್ಲ ಘಟಕಗಳ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.