ಮೂಡುಬಿದಿರೆ: ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವ ಹೊಸಂಗಡಿ ಮಾರೂರು ಶ್ರೀ ಗೋಪಾಲಕೃಷ್ಣ, ಕೊಡಮನಿತ್ತಾಯ ದೇವಸ್ಥಾನಕ್ಕೆ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಹೊರೆಕಾಣಿಕೆ ಸಲ್ಲಿಸಲಾಯಿತು. ಇರುವೈಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಜಾತ ಜೆ. ಶೆಟ್ಟಿ, ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಭುಜಂಗ ಆರ್. ಶೆಟ್ಟಿ, ಇರುವೈಲು ಹಾಗೂ ಸತೀಶ್ಚಂದ್ರ ಸಾಲ್ಯಾನ್ ಅವರ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಫುಲ್ಲ ಕೆ. ಸಾಲ್ಯಾನ್, ದೀಪಾ ದಿನೇಶ್ ಐತಾಳ್, ಗ್ರಾಮಸ್ಥರಾದ ಇರುವೈಲು ಪಂಜಿ ದಿನೇಶ ಪ್ರಭು, ಮತ್ತಿತರರು ಹೊಸಂಗಡಿ ದೇವಸ್ಥಾನಕ್ಕೆ ಆಗಮಿಸಿ ಹೊರೆಕಾಣಿಕೆ ನೀಡಿದರು. ಹೊಸಂಗಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಾರುತಿಗುಡ್ಡೆ ಶಂಭು ಎಸ್. ಶೆಟ್ಟಿ ಸಮಕ್ಷಮದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು. ಇರುವೈಲು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ. ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಂಬಯಿ ಸಮಿತಿಯ ಅಧ್ಯಕ್ಷ ಭೋಜ ಎಸ್. ಶೆಟ್ಟಿ, ಮುಂಬಯಿ ಸಮಿತಿಯ ಕೋಶಾಧಿಕಾರಿ ಬಾಡಬೆಟ್ಟು ಸಿ.ಪಿ. ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ದೇವಸ್ಥಾನದ ಕಚೇರಿ ಸಹಾಯಕಿ ಸೇವಂತಿ ಮತ್ತು ಇತರರು ಭಾಗವಹಿಸಿದ್ದರು.