ಮೂಡುಬಿದಿರೆ: ಪುತ್ತಿಗೆಯ ಮಹತೋಭಾರ ಸೋಮನಾಥೇಶ್ವರ ದೇವಸ್ಥಾನದ ಹಗಲು ರಥೋತ್ಸವದ ಅಂಗವಾಗಿ ಮಹಾಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ಸಾಂಸ್ಕೃತಿಕ ವೇದಿಕೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಕರಿಂಜೆ ಶ್ರೀಗಳಿಂದ 'ಯಕ್ಷ ಭಗೀರಥ' ಪ್ರಶಸ್ತಿ ಪುರಸ್ಕೃತರಾದ ಯಕ್ಷನಿಧಿ ಮೂಡುಬಿದಿರೆ ಶಿಕ್ಷಣ ಸಂಸ್ಥೆ ಹಾಗೂ ಯುವ ಮೇಳದ ಗುರು ಶಿವಕುಮಾರ್ ಮೂಡುಬಿದಿರೆ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಕುಲದೀಪ ಎಂ. ಪುತ್ತಿಗೆಗುತ್ತು, ಕೊಲಕಾಡಿ ನಿಲೇಶ್ ಶೆಟ್ಟಿ, ಮಹಾಮ್ಮಾಯಿ ಮರಾಟಿ ಸಂಘದ ಮಾಜಿ ಅಧ್ಯಕ್ಷ ವಿಠಲ ನಾಯ್ಕ, ಅಂಗನವಾಡಿ ಕಾರ್ಯಕರ್ತೆ ಗುಣಶೀಲ, ಸಂಜೀವ ನಾಯ್ಕ ಶೇಡಿಗುರಿ ಉಪಸ್ಥಿತರಿದ್ದರು. ಸಂಜೀವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷನಿಧಿ ಮೂಡುಬಿದಿರೆ ಮಕ್ಕಳ ತಂಡದಿಂದ 'ಛತ್ರಪತಿ ಶಿವಾಜಿ' ಯಕ್ಷಗಾನ ಪ್ರದರ್ಶನಗೊಂಡಿತು.