ಮೂಡುಬಿದಿರೆ: ಜೈನಪೇಟೆಯಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ವಿಶ್ವ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ವಿಶೇಷ ಕಣ್ಣಿನ ತಪಾಸಣೆ ಸುರಕ್ಷಿತ ವಾರವನ್ನು ಹಮ್ಮಿಕೊಂಡಿದೆ. ಮೇ 1 ರಿಂದ ಮೇ 7 ರವರೆಗೆ ನಡೆಯಲಿರುವ ಈ ವಿಶೇಷ ಅಭಿಯಾನದಲ್ಲಿ ಕಾರ್ಮಿಕ ವರ್ಗದವರು ಕಣ್ಣಿನ ತಪಾಸಣೆಗೆ ಶೇ. 50 ರಷ್ಟು ರಿಯಾಯಿತಿ ಪಡೆಯಬಹುದು. ಶಸ್ತ್ರಚಿಕಿತ್ಸೆಗೆ ಶೇ. 15 ರಷ್ಟು ಹಾಗೂ ಕನ್ನಡಕಗಳ ಖರೀದಿಗೆ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜೈನಪೇಟೆಯ ಫಾರ್ಚೂನ್ ಹೈವೇ-II ಕಟ್ಟಡದ ಮೊದಲ ಮಹಡಿಯಲ್ಲಿರುವ ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 6:30 ರವರೆಗೆ ತಪಾಸಣೆ ಲಭ್ಯವಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 87927 91085 ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕಾರ್ಮಿಕ ದಿನಾಚರಣೆ: ಮೂಡುಬಿದಿರೆ ಪ್ರಸಾದ್ ನೇತ್ರಾಲಯದಲ್ಲಿ ಮೇ 1ರಿಂದ ವಿಶೇಷ ಕಣ್ಣಿನ ತಪಾಸಣಾ ಸಪ್ತಾಹ
ಕಾರ್ಮಿಕ ದಿನಾಚರಣೆ: ಮೂಡುಬಿದಿರೆ ಪ್ರಸಾದ್ ನೇತ್ರಾಲಯದಲ್ಲಿ ಮೇ 1ರಿಂದ ವಿಶೇಷ ಕಣ್ಣಿನ ತಪಾಸಣಾ ಸಪ್ತಾಹ