ಮೂಡುಬಿದಿರೆ: ಅಲಂಗಾರು ಶ್ರೀ ಜಗದ್ಗುರು ಅಯ್ಯಸ್ವಾಮಿ ಮಠದ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಸಂಪೂರ್ಣ ಜೀರ್ಣೋದ್ಧಾರ ಅಂಗವಾಗಿ ಸೋಮವಾರ ಬೆಳಿಗ್ಗೆ ಅದ್ವೇಷ್ಟಿಕಾ ಶಿಲಾ ಮುಹೂರ್ತ ಕಾರ್ಯಕ್ರಮ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಕೇಶವ ತಂತ್ರಿ ಆಚಾರ್ಯತ್ವದಲ್ಲಿ ಸುರತ್ಕಲ್ ಮುಂಚೂರು ಶಿಲ್ಪಿ ಉಮೇಶ ಆಚಾರ್ಯ ಉಪಸ್ಥಿತಿ, ನಿರ್ದೇಶನದೊಂದಿಗೆ ಜರುಗಿತು. ಶಿಲಾಶಿಲ್ಪಿ ಕೃಷ್ಣ ಆಚಾರ್ಯ ನಕ್ರೆ ಕಾರ್ಕಳ, ಸುಧೀರ ಆಚಾರ್ಯ ಬುಕ್ಕಿಗುಡ್ಡೆ ಪೆರ್ಡೂರು, ಕಾಷ್ಠ ಶಿಲ್ಪಿ ಶಿವಪ್ರಸಾದ ಆಚಾರ್ಯ ಅಶ್ವತ್ಥಪುರ, ಎಂಜಿನಿಯರ್ ಗುರುಪ್ರಸಾದ ಆಚಾರ್ಯ ಮಂಗಳೂರು, ಶ್ರೀ ಗುರುಮಠ ಕಾಳಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಯೋಗೀಶ ಆಚಾರ್ಯ, ಕಾಳಕಾಂಬಾ ಸೇವಾ ಸಮಿತಿ ಅಧ್ಯಕ್ಷ ಜಗದೀಶ ಆಚಾರ್ಯ ಬೆಳಾಡಿ, ಮಹಿಳಾ ಸಮಿತಿ ಅಧ್ಯಕ್ಷೆ ಕಸ್ತೂರಿ ದೇವರಾಜ ಆಚಾರ್ಯ, ಕೊಡ್ಯಡ್ಕ ಪ್ರಭಾಕರ ಆಚಾರ್ಯ ದಂಪತಿ, ಮೋಹನ ಆಚಾರ್ಯ ದಂಪತಿ, ಚಿನ್ನದ ಕೆಲಸಗಾರರ ಹಿತರಕ್ಷಣಾ ಸಮಿತಿ, ಗುರುಕಾಷ್ಠಶಿಲ್ಪ ಸಮಿತಿ, ಭಜನ ಸಮಿತಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ವೈದಿಕ ವೃಂದದವರು, ಕ್ಷೇತ್ರದ ಭಕ್ತಾದಿಗಳು ಪಾಲ್ಗೊಂಡರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಧನಂಜಯ ಪಾಲ್ಕಿ ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.