ಮೂಡುಬಿದಿರೆ:ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಸಹಯೋಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ವತಿಯಿಂದ ಮೈಸೂರಿನ ಕನ್ನಡ ಭವನದಲ್ಲಿ ಮೇ 3ರಂದು ಕವಿ-ಕಾವ್ಯ ಸಂಭ್ರಮ ಮತ್ತು ರತ್ನ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕಿನ ವೇಣೂರು ನಿಟ್ಟಡೆಯ ಯಶ್ವಿತ್ ಎಚ್. ಕುಲಾಲ್ ಅವರಿಗೆ ‘ಲಿಟಲ್ ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಯಶ್ವಿತ್ ಎಚ್. ಕುಲಾಲ್ ಬಹುಮುಖ ಪ್ರತಿಭೆಯಾಗಿದ್ದು, ನೃತ್ಯ ಕ್ಷೇತ್ರದಲ್ಲಿ ತೋರಿದ ಸಾಧನೆಗಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ವಾಯ್ಸ್ ಆಫ್ ಆರಾಧನ ಸಾಂಸ್ಕೃತಿಕ ಸಂಸ್ಥೆಯ ಸದಸ್ಯರಾಗಿದ್ದು, ಈ ಹಿಂದೆ ಬಂಟ್ವಾಳ ಮತ್ತು ಕಾರ್ಕಳ ಸೆಂಟ್ರಲ್ ಲಯನ್ಸ್ ಕ್ಲಬ್ಗಳು ಇವರ ಪ್ರತಿಭೆಯನ್ನು ಗುರುತಿಸಿ ಗೌರವಿಸಿವೆ. 2025ರ ಜುಲೈನಲ್ಲಿ ಏರ್ಯ ಆಳ್ವ ಫೌಂಡೇಶನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಆಯೋಜಿಸಿದ್ದ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿಯೂ ತಾಲೂಕು ಮಟ್ಟದ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಯಶ್ವಿತ್ ಎಚ್. ಕುಲಾಲ್, ನಿಟ್ಟಡೆ ಕುಂಭಶ್ರೀ ಶಾಲಾ ಬಳಿಯ ಮೋದಕ ಮನೆ ನಿವಾಸಿ ಹರೀಶ್ ಪಿ. ಮತ್ತು ವನಿತಾ ಕೆ. ದಂಪತಿಯ ಪುತ್ರ.
ಯಶ್ವಿತ್ ಎಚ್. ಕುಲಾಲ್ಗೆ ‘ಲಿಟಲ್ ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ಗರಿ
ಯಶ್ವಿತ್ ಎಚ್. ಕುಲಾಲ್ಗೆ ‘ಲಿಟಲ್ ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ಗರಿ