ಮೂಡುಬಿದಿರೆ: ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕಲ್ಲಮುಂಡ್ಕೂರಿನ ಗಂಗಾಧರ ಶೆಟ್ಟಿ (68) ಶುಕ್ರವಾರ ನಿಧನರಾಗಿದ್ದಾರೆ. ನಿಡ್ಡೋಡಿ ನಿವಾಸಿಯಾದ ಅವರಯ ಕಲ್ಲಮುಂಡ್ಕೂರಿನಲ್ಲಿ ಗುರು ಎಂಟರ್ಪ್ರೈಸಸ್ ಸಂಸ್ಥೆ ನಡೆಸುತ್ತಿದ್ದರು. ರಂಗಕಲಾವಿದರಾಗಿ ಹಲವಾರು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದ ಇವರು, ಪ್ರಸ್ತುತ ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷರಾಗಿ, ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸಮಾಜಸೇವೆ ಮಾಡಿದ್ದರು. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕಲ್ಲಮುಂಡ್ಕೂರು: ರಂಗಭೂಮಿ ಕಲಾವಿದ, ಗುರು ಎಂಟರ್ಪ್ರೈಸಸ್ ಸಂಸ್ಥೆ ಗಂಗಾಧರ ಶೆಟ್ಟಿ ನಿಧನ
ಕಲ್ಲಮುಂಡ್ಕೂರು: ರಂಗಭೂಮಿ ಕಲಾವಿದ, ಗುರು ಎಂಟರ್ಪ್ರೈಸಸ್ ಸಂಸ್ಥೆ ಗಂಗಾಧರ ಶೆಟ್ಟಿ ನಿಧನ