ಮೂಡುಬಿದಿರೆ: ತಾಲೂಕಿನ ಮಾರೂರು ಗ್ರಾಮದ ಮೆಲಂದಗುಡ್ಡೆಯಲ್ಲಿ ಎರಡು ಮನೆಗಳಿಗೆ ಸಿಡಿಲು ಬಡಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಯಂತ್ ಮತ್ತು ಕವಿತಾ ಗಾಯಗೊಂಡವರಾಗಿದ್ದು, ಸಿಡಿಲಿನ ತೀವ್ರತೆಗೆ ಮನೆಗಳಿಗೆ ಹಾನಿಯಾಗಿದೆ.