ಮೂಡುಬಿದಿರೆ: ಶನಿವಾರ ಸಾಯಂಕಾಲ ಸುರಿದ ಭಾರಿ ಗಾಳಿ ಮಳೆಗೆ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಬೃಹತ್ ಮರ ಬಿದ್ದು ಕೆಲವು ಗಂಟೆಗಳ ಕಾಲ ಮೂಡುಬಿದಿರೆ-ಬೆಳ್ಮಣ್ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇದ್ದಕ್ಕಿದ್ದಂತೆ ಗಾಳಿಯ ವೇಗ ಹೆಚ್ಚಿದ್ದರಿಂದ ರಸ್ತೆ ಬದಿಯಲ್ಲಿದ್ದ ದೈತ್ಯ ಮರವು ಬೇರು ಸಮೇತ ರಸ್ತೆಯ ಮಧ್ಯಕ್ಕೆ ಧರಗುರುಳಿದೆ. ಈ ಮಾರ್ಗವು ಮುಖ್ಯ ಸಂಪರ್ಕ ರಸ್ತೆಯಾಗಿದ್ದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಕೆಲವು ಗಂಟೆಗಳ ಕಾಲ ತೀವ್ರ ತೊಂದರೆ ಅನುಭವಿಸುವಂತಾಯಿತು.
ಕೊಡ್ಯಡ್ಕ ದೇವಳದ ಬಳಿ ನೆಲಕ್ಕುರುಳಿದ ಬೃಹತ್ ಮರ: ಮೂಡುಬಿದಿರೆ-ಬೆಳ್ಮಣ್ ರಸ್ತೆ ಸಂಚಾರ ಅಸ್ತವ್ಯಸ್ತ
ಕೊಡ್ಯಡ್ಕ ದೇವಳದ ಬಳಿ ನೆಲಕ್ಕುರುಳಿದ ಬೃಹತ್ ಮರ: ಮೂಡುಬಿದಿರೆ-ಬೆಳ್ಮಣ್ ರಸ್ತೆ ಸಂಚಾರ ಅಸ್ತವ್ಯಸ್ತ