ಮೂಡುಬಿದಿರೆ: ಅಧಿಕ ಮಾಸ ಪ್ರಯುಕ್ತ ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಹಮ್ಮಿಕೊಂಡ ನಿತ್ಯ ಭಜನಾ ಕಾರ್ಯಕ್ರಮಕ್ಕೆ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಮಾರ್ಗದರ್ಶನದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. ವೇ.ಮೂ.ಹರೀಶ್ ಭಟ್, ಪದ್ಮನಾಭ ಭಟ್, ವಾಸುದೇವ ಭಟ್, ಮೊಕ್ತೇಸರ ರಘುವೀರ್ ಶೆಣೈ ಉಪಸ್ಥಿತರಿದ್ದರು. ಆರಂಭದ ದಿನವಾದ ಭಾನುವಾರ ಮುನಿಯಾಲು ದೇವದಾಸ ಕಿಣಿ ಮನೆಯವರು ಹಾಗೂ ಜಯಲಕ್ಷ್ಮೀ ಪದ್ಮನಾಭ ಭಟ್ ಮನೆಯವರು ಭಜನಾ ಸೇವೆ ಸಲ್ಲಿಸಿದರು.