ಮೂಡುಬಿದಿರೆ: ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮೇ 29ರಂದು ಸಂಜೆ 6.30ಕ್ಕೆ ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ರಂಗಾಯಣ ಶಿವಮೊಗ್ಗ ತಂಡದಿಂದ “ಸ್ವಾತಂತ್ರ್ಯದ ಓಟ” ನಾಟಕ ಪ್ರದರ್ಶನ ನಡೆಯಲಿದೆ. ನೀನಾಸಂ ನಟರಾಜ ಹೊನ್ನವಳ್ಳಿ ನಿರ್ದೇಶಿಸಿರುವ ಈ ನಾಟಕವು ಬೊಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿಯನ್ನು ಆಧರಿಸಿದ್ದು, ದೇಶ ವಿಭಜನೆಯ ಸಂದರ್ಭದ ನಿರಾಶ್ರಿತ ಜೀವನ, ಮಾನವೀಯ ಸಂಬಂಧಗಳು ಹಾಗೂ ಸಾಮರಸ್ಯದ ಸಂದೇಶವನ್ನು ಬಿಂಬಿಸುತ್ತದೆ. ಕವ್ವಾಲಿ, ಗಝಲ್ ಸೇರಿದಂತೆ ಭಾರತೀಯ ಸಂಗೀತ ಅಂಶಗಳನ್ನು ಒಳಗೊಂಡ ಈ ಮೂರು ಗಂಟೆಗಳ ನಾಟಕ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿದೆ. ಪ್ರವೇಶ ಉಚಿತವಾಗಿದ್ದು, ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ ನಾಟಕ ನಿಗದಿತ ವೇಳೆಗೆ ಆರಂಭವಾಗಲಿದೆ ಎಂದು ಡಾ. ಎಂ. ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 29ರಂದು ಆಳ್ವಾಸ್ನಲ್ಲಿ 'ಸ್ವಾತಂತ್ರ್ಯದ ಓಟ' ನಾಟಕ ಪ್ರದರ್ಶನ
ಮೇ 29ರಂದು ಆಳ್ವಾಸ್ನಲ್ಲಿ 'ಸ್ವಾತಂತ್ರ್ಯದ ಓಟ' ನಾಟಕ ಪ್ರದರ್ಶನ