ಮೂಡುಬಿದಿರೆ: ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲದ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಂಟಿಕಟ್ಟೆ ಕೋಟಿ ಚೆನ್ನಯ್ಯ ಕಂಬಳ ಕ್ರೀಡಾಂಗಣದ ಬಳಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಕಂಬಳ ಕ್ರೀಡಾಂಗಣದ ಸುತ್ತಮುತ್ತಲಿನ ಪರಿಸರದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ಪುರಸಭಾ ಅಧ್ಯಕ್ಷ ಮಾಜಿ ಜಯಶ್ರೀ ಕೇಶವ್, ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ ಒಂಟಿಕಟ್ಟೆ, ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಯಶವಂತ್ ಮಾಸ್ತಿಕಟ್ಟೆ, ಪ್ರಮುಖರಾದ ರಾಜೇಶ್ ಮಲ್ಯ, ಗೋಪಾಲ್ ಶೆಟ್ಟಿಗಾರ್, ಎಸ್ಟಿ ಮೋರ್ಚಾ ಅಧ್ಯಕ್ಷ ಅಣ್ಣಪ್ಪ ಕೆ ಎಸ್, ಮಂಡಲ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘು, ಶಕ್ತಿಕೇಂದ್ರ ಪ್ರಮುಖರಾದ ಕರುಣಾಕರ ಶೆಟ್ಟಿ ಮತ್ತು ಶಶಿಕಿರಣ್ ಕಲ್ಲಬೆಟ್ಟು ಭಾಗವಹಿಸಿದ್ದರು. ಯುವ ಮೋರ್ಚಾ ಕಾರ್ಯದರ್ಶಿ ಪ್ರಜ್ವಲ್ ಶೆಣೈ, ಬೂತ್ ಪ್ರಮುಖರಾದ ಉಮೇಶ್ ಹೆಗ್ಡೆ, ಪ್ರವೀಶ್ ಒಂಟಿ ಕಟ್ಟೆ, ವಿಠ್ಠಲ್ ದೇವಾಡಿಗ, ಶಿವರಾವ್ ಶೆಟ್ಟಿ ಉಪಸ್ಥಿತರಿದ್ದರು.
ಕೋಟಿ ಚೆನ್ನಯ್ಯ ಕಂಬಳ ಕ್ರೀಡಾಂಗಣದ ಬಳಿ ಸಸಿ ನೆಟ್ಟು ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವನಮಹೋತ್ಸವ
ಕೋಟಿ ಚೆನ್ನಯ್ಯ ಕಂಬಳ ಕ್ರೀಡಾಂಗಣದ ಬಳಿ ಸಸಿ ನೆಟ್ಟು ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವನಮಹೋತ್ಸವ