ಮೂಡುಬಿದಿರೆ: ಕೆಸರುಗದ್ದೆ ಶ್ರೀರಾಮ ಮಂದಿರದಲ್ಲಿ ಅಧಿಕ ಪುರುಷೋತ್ತಮ ಮಾಸದ ಆಚರಣೆಯ ಅಂಗವಾಗಿ ಭಾನುವಾರ ವಿಶೇಷ ಹೂವಿನ ಪೂಜೆ ನಡೆಯಿತು. ಸೀತಾಪತಿ ಶ್ರೀರಾಮಚಂದ್ರ ದೇವರಿಗೆ ಭಜಕರಿಂದ ಸಮರ್ಪಿಸಲಾದ ಸುಮಾರು 40 ಅಟ್ಟೆ ಮಲ್ಲಿಗೆಯಿಂದ ಅಲಂಕಾರ ಮಾಡಲಾಗಿದ್ದು, ಗಮನ ಸೆಳೆಯಿತು. ಕಾರ್ಕಳದ ಜಿ.ಎಸ್.ಬಿ. ಬಾಲಕರ ಭಜನ್ ಸಂಧ್ಯಾ, ಮಂಗಳೂರಿನ ಮೇಘಾ ಪೈ ಬಳಗದ ಭಜನಾ ಸಂಗಮ ಹಾಗೂ ಕೊಂಚಾಡಿಯ ಮುರಳೀಧರ ಕಾಮತ್ ಬಳಗದ ಭಜನಾ ಕಾರ್ಯಕ್ರಮಗಳು ನಡೆದವು. ವಿವಿಧ ಭಜನಾ ತಂಡಗಳ ಭಜನೆ ಪ್ರಸ್ತುತಪಡಿಸಿದರು. ಧಾರ್ಮಿಕ ಕಾರ್ಯಕ್ರಮಗಳು ಪದ್ಮನಾಭ ಭಟ್ ಹಾಗೂ ಸುಧೇಶ್ ಭಟ್ ಅವರ ನೇತೃತ್ವದಲ್ಲಿ ನೆರವೇರಿದವು. ಸಮಾಜದ ಅಧ್ಯಕ್ಷ ಕೆ. ವಿಶ್ವನಾಥ ಮಾಧವ ಪ್ರಭು, ಹಿರಿಯರಾದ ಎಂ. ದಯಾನಂದ ಪೈ ಪಡುಮಾರ್ನಾಡು ಸೇರಿದಂತೆ ಅಪಾರ ಸಂಖ್ಯೆಯ ಭಜಕರು ಉಪಸ್ಥಿತರಿದ್ದರು.
ಪುರುಷೋತ್ತಮ ಮಾಸ: ಕೆಸರುಗದ್ದೆ ಶ್ರೀರಾಮ ಮಂದಿರದಲ್ಲಿ ವಿಶೇಷ ಹೂವಿನ ಪೂಜೆ- ಸುಮಾರು 40 ಅಟ್ಟೆ ಮಲ್ಲಿಗೆಯಿಂದ ದೇವರ ಅಲಂಕಾರ
ಪುರುಷೋತ್ತಮ ಮಾಸ: ಕೆಸರುಗದ್ದೆ ಶ್ರೀರಾಮ ಮಂದಿರದಲ್ಲಿ ವಿಶೇಷ ಹೂವಿನ ಪೂಜೆ- ಸುಮಾರು 40 ಅಟ್ಟೆ ಮಲ್ಲಿಗೆಯಿಂದ ದೇವರ ಅಲಂಕಾರ