ಮೂಡುಬಿದಿರೆ : ಬೆಳುವಾಯಿ ಕೆಸರ್ಗದ್ದೆ ನಿವಾಸಿ ರಾಮದಾಸ ಪ್ರಭು (56) ಅನಾರೋಗ್ಯದಿಂದ ಶನಿವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಎಸ್ಕೆಎಫ್ ಕೈಗಾರಿಕಾ ಸಂಸ್ಥೆಯಲ್ಲಿ ದಶಕಗಳ ಕಾಲ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದರು. ಕೃಷಿಕರಾಗಿ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದರು. ಬೇಕರಿ ಸ್ಥಾಪಿಸಿ ಮುನ್ನಡೆಸಿದ್ದರು.