ಮೂಡುಬಿದಿರೆ: ಇಲ್ಲಿನ ಯುವ ಬಂಟರ ಸಂಘದ 2026 ಹಾಗೂ 2027ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದಿದ್ದು, ಸಂಘದ ಹೊಸ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಬೆಳುವಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಪ್ರಮುಖ ಜವಾಬ್ದಾರಿಗಳಾದ ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಮಿಜಾರು ಹಾಗೂ ಕೋಶಾಧಿಕಾರಿಯಾಗಿ ಭರತ್ ಶೆಟ್ಟಿ ಇರುವೈಲು ಅವರನ್ನು ಜವಾಬ್ದಾರಿಗೆ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರ ಹುದ್ದೆಗೆ ಸಂದೀಪ್ ಎಂ ಶೆಟ್ಟಿ ತೋಡಾರು ಮತ್ತು ಸುಕುಮಾರ್ ಶೆಟ್ಟಿ ದರೆಗುಡ್ಡೆ ನಿಯೋಜನೆಗೊಂಡಿದ್ದಾರೆ. ಸಂಘದ ಸಂಘಟನಾತ್ಮಕ ಬೆಳವಣಿಗೆಗೆ ಪೂರಕವಾಗಿ ಜೊತೆ ಕಾರ್ಯದರ್ಶಿಯಾಗಿ ನಿಖಿಲ್ ಶೆಟ್ಟಿ ಇರುವೈಲು ಹಾಗೂ ಜೊತೆ ಕೋಶಾಧಿಕಾರಿಯಾಗಿ ಸಂತೋಷ್ ಶೆಟ್ಟಿ ಚಿತ್ತಾರ ಕಾರ್ಯನಿರ್ವಹಿಸಲಿದ್ದಾರೆ. ಗೌರವಾಧ್ಯಕ್ಷರಾಗಿ ವಿವೇಕ್ ಆಳ್ವ, ಜಯಕುಮಾರ್ ಶೆಟ್ಟಿ ಹಾಗೂ ಸಾಮಾಜಿಕ ಜಾಲತಾಣ ಪ್ರಮುಖರಾಗಿ ಆದರ್ಶ್ ಶೆಟ್ಟಿ ಕೊಡ್ಯಡ್ಕ ಆಯ್ಕೆಯಾಗಿದ್ದಾರೆ.

ಯುವ ಪೀಳಿಗೆಯಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿ ಆದರ್ಶ್ ಶೆಟ್ಟಿ ಕಡಂದಲೆ ಆಯ್ಕೆಯಾಗಿದ್ದು, ಇವರೊಂದಿಗೆ ಜೊತೆಯಾಗಿ ನಿತ್ಯಾನಂದ ಶೆಟ್ಟಿ ಬಿರಾವು, ತಿಲಕ್ ಶೆಟ್ಟಿ ಮತ್ತು ಅಖಿಲ್ ಶೆಟ್ಟಿ ಮಿಜಾರು ಜವಾಬ್ದಾರಿ ಹಂಚಿಕೊಂಡಿದ್ದಾರೆ. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶರತ್ ಶೆಟ್ಟಿ ಪುತ್ತಿಗೆ ಆಯ್ಕೆಯಾಗಿದ್ದು, ಇವರಿಗೆ ಸುದಾಕರ ಶೆಟ್ಟಿ ಬೆದ್ರ ಹಾಗೂ ಸುದೀರ್ ಶೆಟ್ಟಿ ದರೆಗುಡ್ಡೆ ಸಾಥ್ ನೀಡಲಿದ್ದಾರೆ.