ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಮತ್ತು ಸೀನಿಯರ್ ಚೇಂಬರ್ ಮೂಡುಬಿದಿರೆ ವತಿಯಿಂದ 18 ಬಸದಿಗಳ ಮೊಕ್ತೇಸರರಾಗಿದ್ದ ಆನಡ್ಕ ದಿನೇಶ್ ಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಸಮಾಜ ಮಂದಿರ ಸಭಾದಲ್ಲಿ ಸಂಘಟಿಸಲಾಯಿತು. ಚೌಟರ ಅರಮನೆಯ ಕುಲದೀಪ್ ಎಂ, ಪ್ರತಾಪ್ ಕುಮಾರ್, ಅಬುಲ್ ಅಲಾ ಪುತ್ತಿಗೆ, ನಿತೇಶ್ ಬಲ್ಲಾಳ್, ರೋಟರಿ ಕ್ಲಬ್ ಸಹಾಯಕ ಗವರ್ನರ್ ಫೆಡ್ರಿಕ್ ರಾಕ್ವೀನ್ ಲೋಬೊ ಮತ್ತು ರಶ್ಮಿತಾ ಯುವರಾಜ್ ಜೈನ್ ಮೃತರಿಗೆ ನುಡಿನಮನ ಸಲ್ಲಿಸಿದರು. ರೋಟರಿ ಅಧ್ಯಕ್ಷ ಕರುಣಾಕರ ಜೈನ್ ಹಾಗೂ ಸೀನಿಯರ್ ಚೇಂಬರ್ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಉಪಸ್ಥಿತರಿದ್ದರು. ಮೃತರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ, ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ವಿನಯಚಂದ್ರ ಕಾರ್ಯಕ್ರಮ ನಿರ್ವಹಿಸಿದರು.