ಮೂಡುಬಿದಿರೆ: ಕಡಂದಲೆಯ ತೊಂದಡ್ಪು ಶ್ರೀ ಗುರುನಿತ್ಯಾನಂದ ಸ್ವಾಮಿ ಭಜನಾ ಮಂದಿರವು ತನ್ನ 59ನೇ ವಾರ್ಷಿಕ ಭಜನಾ ಮಂಗಲೋತ್ಸವವನ್ನು ಏಪ್ರಿಲ್ 23ರಂದು ಆಚರಿಸಲಾಗುತ್ತದೆ. ಆ ದಿನ ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ, ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಮಹಾಪೂಜೆಯನ್ನು ನೆರವೇರಿಸಲಾಗುತ್ತದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಯಿಂದ ಭಜನಾ ಮಂಗಲೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಈ ವೇಳೆ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಸೇವೆಯನ್ನು ಸಲ್ಲಿಸಲಿವೆ. ಸಂಜೆ 7ರಿಂದ 8ರವರೆಗೆ ಆದಿಶಕ್ತಿ ಭಜನಾ ಮಂಡಳಿ ಉಳುವೆ 8ರಿಂದ 9ರವರೆಗೆ ಯಕ್ಷ ಭಜನಾ ಮಂಡಳಿ ಜನತಾನಗರ, ಕಡಂದಲೆ, 9ರಿಂದ 10ರವರೆಗೆ ಬ್ರಹ್ಮಶ್ರೀ ಗುರುನಾರಾಯಣ ಭಜನಾ ಮಂಡಳಿ, ಪೂಪಾಡಿಕಲ್ಲು ಕಡಂದಲೆ, 10ರಿಂದ 11ರವರೆಗೆ ಸೋಮನಾಥೇಶ್ವರ ಭಜನಾ ಮಂಡಳಿ ವರ್ಣಬೆಟ್ಟು, ಪಾಲಡ್ಕ, 11ರಿಂದ 12ರವರೆಗೆ ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ ಸಚ್ಚೆರಿಪೇಟೆ ಹಾಗೂ 12ರಿಂದ 1ರವರೆಗೆ ಶ್ರೀ ಗುರು ನಿತ್ಯಾನಂದ ಸ್ವಾಮಿ ಭಜನಾ ಮಂಡಳಿ, ತೊಂದಡ್ಪು, ತಂಡದವರು ಭಜನೆ ಪ್ರಸ್ತುತಪಡಿಸಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ತೊಂಡಡ್ಡು ಶ್ರೀ ಗುರುನಿತ್ಯಾನಂದ ಸ್ವಾಮಿ ಭಜನಾ ಮಂದಿರದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.
ಕಡಂದಲೆ ತೊಂದಡ್ಪು ಶ್ರೀ ಗುರುನಿತ್ಯಾನಂದ ಸ್ವಾಮಿ ಭಜನಾ ಮಂದಿರದಲ್ಲಿ ಏ.23ರಂದು 59ನೇ ವಾರ್ಷಿಕ ಭಜನಾ ಮಂಗಲೋತ್ಸವ
ಕಡಂದಲೆ ತೊಂದಡ್ಪು ಶ್ರೀ ಗುರುನಿತ್ಯಾನಂದ ಸ್ವಾಮಿ ಭಜನಾ ಮಂದಿರದಲ್ಲಿ ಏ.23ರಂದು 59ನೇ ವಾರ್ಷಿಕ ಭಜನಾ ಮಂಗಲೋತ್ಸವ