ಕುಪ್ಪೆಪದವು: 2025–26ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಪ್ಪೆಪದವು ಕಾವೇರಿ ವಿದ್ಯಾಲಯವು ಶೇ.100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದೆ. ಶಾಲೆಯ ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 9 ಮಂದಿ ಡಿಸ್ಟಿಂಕ್ಷನ್, 23 ಮಂದಿ ಪ್ರಥಮ ಶ್ರೇಣಿ ಹಾಗೂ 2 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳ ವಿವರ ಹೀಗಿದೆ: ಪವನ್ ಜೆ ಪೂಜಾರಿ (577), ಮಾನ್ವಿ ವಿ ಶೆಟ್ಟಿ (572), ಸೋಹನ್ ಸಲ್ದಾನ್ಹ (568), ರಿಷಾಲ್ ಸಿಕ್ವೇರಾ (565), ಸ್ಪರ್ಶ (557), ಅನುಷಾ (552), ಪ್ರಥಮ್ ಬಿ ದಾಸ್ (543), ಪ್ರಶಂಸ (540) ಹಾಗೂ ಚೇತನ್ ಜಿ ಗೌಡ (533). ಈ ಸಾಧನೆಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಸಹಕಾರ ಕಾರಣವಾಗಿದೆ ಎಂದು ಮುಖ್ಯ ಶಿಕ್ಷಕಿ ಶಾಲೆಟ್ ವಾಸ್ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ: ಕುಪ್ಪೆಪದವು ಕಾವೇರಿ ವಿದ್ಯಾಲಯಕ್ಕೆ ಶೇ.100 ಫಲಿತಾಂಶ
ಎಸ್.ಎಸ್.ಎಲ್.ಸಿ: ಕುಪ್ಪೆಪದವು ಕಾವೇರಿ ವಿದ್ಯಾಲಯಕ್ಕೆ ಶೇ.100 ಫಲಿತಾಂಶ