ಮೂಡುಬಿದಿರೆ: ಮಹಾರಾಷ್ಟ್ರದ ಬಲ್ಹಾರಷ್‌ನಲ್ಲಿ ನಡೆದ 2025-26ನೇ ಸಾಲಿನ ಸೀನಿಯರ್ ವಿಭಾಗದ 19ನೇ ರಾಷ್ಟ್ರಮಟ್ಟದ ಫ್ಲೋರ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿ ವಿಕ್ರೀತಾ ಒಳಗೊಂಡ ಕರ್ನಾಟಕ ತಂಡವು ಕಂಚಿನ ಪದಕ ಗೆದ್ದು ತೃತೀಯ ಸ್ಥಾನ ಪಡೆದಿದೆ. ಹರೀಶ್ ಪೂಜಾರಿ ಮತ್ತು ರಾಜೀವಿ ದಂಪತಿಯ ಪುತ್ರಿಯಾದ ವಿಕ್ರೀತಾ ಪದವಿಪೂರ್ವ ಶಿಕ್ಷಣದ ಅವಧಿಯಿಂದಲೇ ಫ್ಲೋರ್‌ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು, ನವೀನ್ ಎಂ. ಹೆಗ್ಡೆ ಅವರಿಂದ ತರಬೇತಿ ಪಡೆದಿದ್ದಾರೆ. ಈ ಹಿಂದೆ 2025ರ ಸೆಪ್ಟೆಂಬರ್‌ನಲ್ಲಿ ಬಿಹಾರದ ಮುಜಾಫರ್ ಪುರದಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಮೆಂಟ್‌ನಲ್ಲಿಯೂ ತೃತೀಯ ಸ್ಥಾನ ಗಳಿಸಿದ್ದ ಈಕೆ ಅತ್ಯುತ್ತಮ ರಕ್ಷಣಾ ಆಟಗಾರ್ತಿ ಎಂಬ ವೈಯಕ್ತಿಕ ಬಹುಮಾನವನ್ನೂ ಪಡೆದಿದ್ದರು.