ಮೂಡುಬಿದಿರೆ: ಪೊಳಲಿ ರಾಜರಾಜೇಶ್ವರಿ ಅಮ್ಮನವರ ಜಾತ್ರೆಯ ಸಂದರ್ಭದಲ್ಲಿ ರಾಮ್ ಫ್ರೆಂಡ್ಸ್ ಕಟೀಲು ತಂಡದ ವತಿಯಿಂದ ಹಮ್ಮಿಕೊಳ್ಳಲಾದ ಆರೋಗ್ಯ ಸೇವಾಪಥ ಅಭಿಯಾನದಲ್ಲಿ ಸಂಗ್ರಹವಾದ 1,50,000 ರೂಪಾಯಿ ಮೊತ್ತವನ್ನು ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗಾಗಿ ಹಸ್ತಾಂತರಿಸಲಾಯಿತು. ಬಂಟ್ವಾಳ ತಾಲೂಕಿನ ಕರ್ಪೆ ನಿವಾಸಿ ಸಂತೋಷ್ ಪೂಜಾರಿ ಅವರ 4 ವರ್ಷದ ಪುತ್ರ ಸಾರ್ಥಕ್ ಪೂಜಾರಿ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಮಗುವಿನ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ತಂಡದ ಸದಸ್ಯರು ಹಾಗೂ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಈ ಧನಸಹಾಯ ನೀಡಿದ್ದಾರೆ. ಪೊಳಲಿ ರಾಜರಾಜೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ರಾಮ್ ಭಟ್ ಪೊಳಲಿ ಅವರು ಮಗುವಿನ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿ ಹರಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ನಾಗೇಶ್ ಪೊಳಲಿ, ಯಶವಂತ್ ಪೊಳಲಿ, ತಂಡದ ಸ್ಥಾಪಕಾಧ್ಯಕ್ಷ ರಮಾನಂದ ಪೂಜಾರಿ ಕಟೀಲು, ಅಧ್ಯಕ್ಷ ಸುಮಂತ್ ಸುವರ್ಣ ಬಡಗಮಿಜಾರು ಉಪಸ್ಥಿತರಿದ್ದರು. ಸದಸ್ಯರಾದ ರಾಕೇಶ್ ಪೊಳಲಿ, ಗಣೇಶ್ ಕೋಟ್ಯಾನ್ ಪೆರ್ಮೆದೆ, ಗುರುಪ್ರಸಾದ್ ಮುಲ್ಕಿ, ಲಕ್ಷ್ಮಣ ಪೂಜಾರಿ ಪೊಳಲಿ, ನಾಗೇಶ್ ಬುಡಿಗಾಡ್, ರಾಕೇಶ್ ಬಜ್ಪೆ, ಶಶಿ ಬುಡಿಗಾಡ್, ಅಜಿತ್ ಆಚಾರ್ಯ, ಧನುಸ್ಸು ಉಲ್ಲಂಜೆ, ಸಾತ್ವಿಕ್ ಉಲ್ಲಂಜೆ, ಪ್ರಜ್ವಲ್ ಮೂರುಕಾವೇರಿ ಹಾಗೂ ಗೋಪಿನಾಥ್ ಭಟ್ರಕೆರೆ ಪಾಲ್ಗೊಂಡಿದ್ದರು.
ಸೇವೆಯ ಪಥದಲ್ಲಿ ರಾಮ್ ಫ್ರೆಂಡ್ಸ್ ಕಟೀಲು: ಮಗುವಿನ ಚಿಕಿತ್ಸೆಗೆ ಉಳಿಸಲು ಕೈಜೋಡಿಸಿದ ಭಕ್ತರು, ಸಂಘಟನೆ
ಸೇವೆಯ ಪಥದಲ್ಲಿ ರಾಮ್ ಫ್ರೆಂಡ್ಸ್ ಕಟೀಲು: ಮಗುವಿನ ಚಿಕಿತ್ಸೆಗೆ ಉಳಿಸಲು ಕೈಜೋಡಿಸಿದ ಭಕ್ತರು, ಸಂಘಟನೆ