ಮೂಡುಬಿದಿರೆ: ಇರುವೈಲು ಹೊಸಮರಾಯ ಪದವು ಬಿಳಿಕಲ್ಲುಗುಡ್ಡ ಮಾಡದಲ್ಲಿ ನವೀಕರಣಗೊಂಡ ನೂತನ ಶಿಲಾಮಯ ಮಾಡದಲ್ಲಿ ಶ್ರೀ ಹೊಸಮರಾಯ ದೈವದ ಪುನಃ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಪಂಚಪರ್ವ ನೇಮೋತ್ಸವವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಇರುವೈಲು ದೇವಳದ ಐ. ರಾಘವೇಂದ್ರ ಆಸ್ರಣ್ಣರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನರರವೇರಿದವು. ಶುಕ್ರವಾರ ಗಣಯಾಗ, ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಕಲಶ ಪ್ರತಿಷ್ಠೆ, ಆಶ್ಲೇಷ ಬಲಿ, ವಟು ಆರಾಧನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ನಂತರ ಕುವೆಸ್ಥಳ ಬಾಳಿಕೆಯಿಂದ ದೈವದರ್ಶನ ಹೊರಟು, ನೂತನ ಮಾಡದಲ್ಲಿ ದೈವ ಪ್ರತಿಷ್ಠೆ ಹಾಗೂ ಭಂಡಾರ ಪ್ರತಿಷ್ಠೆ ನೆರವೇರಿಸಲಾಯಿತು. ಪ್ರತಿಷ್ಠಾಪನೆಯ ನಂತರ ಕಲಶಾಭಿಷೇಕ, ಪಂಚಪರ್ವ, ಪ್ರಸನ್ನ ಪೂಜೆ, ಪಲ್ಲ ಪೂಜೆ ಹಾಗೂ ಶ್ರೀ ಹೊಸಮರಾಯ ದೈವದ ವೈಭವದ ನೇಮೋತ್ಸವ ಜರುಗಿತು. ಗುತ್ತುಬಾಳಿಕೆ ಮನೆತನದವರು, ಕುವೆಸ್ಥಳ ಬಾಳಿಕೆಯವರು, ಹೊಸಮರಾಯ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇರುವೈಲು: ಹೊಸಮರಾಯ ದೈವದ ಪುನಃ ಪ್ರತಿಷ್ಠೆ , ನೇಮೋತ್ಸವ ಸಂಪನ್ನ
ಇರುವೈಲು: ಹೊಸಮರಾಯ ದೈವದ ಪುನಃ ಪ್ರತಿಷ್ಠೆ, ನೇಮೋತ್ಸವ ಸಂಪನ್ನ