3,000ಕ್ಕೂ ಅಧಿಕ ಮಂದಿಗೆ ಆಳ್ವಾಸ್ ಆಯುರ್ವೇದದ ಆಟಿ ಕಷಾಯ
ಮೂಡುಬಿದಿರೆ: ಆಟಿ ತಿಂಗಳ ಅಮಾವಾಸ್ಯೆಯಂದು ಬ್ರಾಹ್ಮೀ ಮುಹೂರ್ತದಲ್ಲಿ ಹಾಲೆಮರದ (ಸಪ್ತಪರ್ಣ) ಕೆತ್ತೆಯನ್ನು ಸಂಗ್ರಹಿಸಿ, ಬೆಳ್ಳುಳ್ಳಿ, ಜೀರಿಗೆ, ಕಹಿಜೀರಿಗೆ, ಶುಂಠಿ, ಕಾಳುಮೆಣಸು, ಓಮ, ಮೆಂತೆ ಸೇರಿದಂತೆ ವಿವಿಧ ದ್ರವ್ಯಗಳನ್ನು ಸೇರಿಸಿ ತಯಾರಿಸುವ ಆಟಿ ಕಷಾಯವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದು ಶಾಸ್ತ್ರೀಯ ನಂಬಿಕೆ ಹಾಗೂ ಪರಂಪರೆಯ ಆಚರಣೆಯಾಗಿದೆ.